ಗುರುವಾರ, ಮೇ 24, 2012

ವ್ಯಾಟ್ ಮನ್ನಾ ಮಾಡಿ





ಜಾಗತಿಕ ಮಟ್ಟದಲ್ಲಿ ರೂಪಾಯಿ ಮೌಲ್ಯ ಕುಸಿದಿದೆ ಎಂದು ಕೇಂದ್ರ ಸರ್ಕಾರ ಪೆಟ್ರೋಲ್ ದರವನ್ನು ರೂ. 7.54 ರಷ್ಟು ಅತೀವವಾಗಿ ಹೆಚ್ಚಿಸಿದೆ. ಪ್ರಸ್ತುತ ವರ್ಷದಲ್ಲಿ ಸುಮಾರು 8-9 ಬಾರಿ ಪೆಟ್ರೋಲ್ ದರ ಏರಿಸುವ ಮೂಲಕ  ಜನಸಾಮಾನ್ಯರ ಮತ್ತು ಬಡವರ ಮೇಲೆ ಗಾಯದ ಬರೆ ಎಳೆದಿದೆ. ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದಾಗಿ ಜೀವನವೇ ದುಸ್ತರವಾಗಿರೋ ಈ ದಿನಗಳಲ್ಲಿ ಕೇಂದ್ರ ಸರ್ಕಾರದ ಈ ಕ್ರಮ ಇನ್ನಷ್ಟು ಪೆಟ್ಟು ನೀಡಿದೆ. ದೇಶದಲ್ಲಿ ಪೆಟ್ರೋಲ್ ಮೇಲೆ ಅತೀ ಹೆಚ್ಚು ಮೌಲ್ಯವರ್ಧಿತ ತೆರಿಗೆ ವಿಧಿಸುವ ರಾಜ್ಯಗಳಲ್ಲಿ ಕರ್ನಾಟಕ ಎರಡನೆಯ ಸ್ಥಾನದಲ್ಲಿದೆ. ಅಂದರೆ ಪೆಟ್ರೋಲ್ ಮೇಲೆ ಶೇ. 30 ರಷ್ಟು ವ್ಯಾಟ್ ರಾಜ್ಯದ ಜನ ಭರಿಸುತ್ತಿದ್ದಾರೆ. ರಾಜಸ್ತಾನ ಸರ್ಕಾರವು 2012-13 ಸಾಲಿನ ಬಜೆಟ್ ನಲ್ಲಿ  ಪೆಟ್ರೋಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು  ಶೇ. 2 ರಷ್ಟು  ಕಡಿತಗೊಳಿಸುವುದಾಗಿ ಘೋಷಿಸಿದೆ.ಗೋವಾ ಮತ್ತು ದೆಹಲಿ ಸರ್ಕಾರಗಳು ಪೆಟ್ರೋಲ್ ಮೇಲಿನ ತೆರಿಗೆಯನ್ನು ಪೂರ್ಣ ಹಿಂಪಡೆದಿವೆ.  ಗೋವಾ ಮತ್ತು ದೆಹಲಿ ಸರಕಾರಗಳಂತೆ ಇತರೆ ರಾಜ್ಯಗಳು ಕ್ರಮ ಕೈಗೊಂಡಲ್ಲಿ ಲೀಟರ್ ಪೆಟ್ರೋಲ್ ಗೆ 15-20 ರೂ.ಗಳ ಜನಸಾಮಾನ್ಯರ ಮೇಲಿನ ಹೊರೆಯನ್ನು ಕಡಿಮೆಗೊಳಿಸಬಹುದೆಂದು ಹಣಕಾಸಿನ ಸಚಿವರಾದ ಪ್ರಣಬ್ ಮುಖರ್ಜಿಯವರು ತಿಳಿಸಿದ್ದಾರೆ.  ಜನಪರ ಸರ್ಕಾರ ಅಂತೆಲ್ಲ ಬೊಬ್ಬೆ ಹಾಕುವ ಸರ್ಕಾರಗಳು ಈ ಕುರಿತು ಯೋಚಿಸಿ ಕೂಡಲೇ ಪೆಟ್ರೋಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಪೂರ್ಣ ಮನ್ನಾ ಮಾಡಬೇಕಿದೆ. ಆ ಮೂಲಕ ಬಡವರ ಮತ್ತು ಜನಸಾಮಾನ್ಯರ ಹಿತ ಕಾಪಾಡಬೇಕಿದೆ.


ರಾಜೇಂದ್ರ ಹುನಗುಂದ.
ಕೊಪ್ಪಳ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ