ಮತ್ತೆ ರಾಜ್ಯದಲ್ಲಿ ಉಪಚುನಾವಣೆ ಪ್ರಹಸನ ಶುರುವಾಗಿದೆ. ಮೊನ್ನೆ ತಾನೇ ಕೊಪ್ಪಳ ಉಪಚುನಾವಣೆಯನ್ನು ಪ್ರತಿಷ್ಠೆಯ ಕಣವಾಗಿ ಕಂಡಿದ್ದ ಆಡಳಿತ ಮತ್ತು ಪ್ರತಿಪಕ್ಷಗಳು ಇಂದು ಬಳ್ಳಾರಿ ಗ್ರಾಮೀಣ ಉಪಚುನಾವಣೆ ನೆಪದಲ್ಲಿ ಮತ್ತೆ ಕಣಕ್ಕೆ ಇಳಿಯಲಿವೆ.
ಶ್ರೀರಾಮುಲುರವರು ರಾಜಿನಾಮೆ ನೀಡಿದ ಉದ್ದೇಶವೇ ಸ್ಪಷ್ಟವಾಗಿಲ್ಲ. ಲೋಕಾಯುಕ್ತರು ತಮ್ಮ ಹೆಸರನ್ನು ಗಣಿ ಆಕ್ರಮದಲ್ಲಿ ಉಲ್ಲೇಖಿಸಿದ್ದು, ಇದರಿಂತ ಮನನೊಂದು ರಾಜೆನಾಮೆ ನೀಡಿದೆ ಅಂತ ಹೇಳುವ ಇವರು, ತಮ್ಮ ವೈಯಕ್ತಿಕ ವಿಚಾರಗಳಿಗಾಗಿ ರಾಜೀನಾಮೆ ನೀಡಿ ಮತ್ತೆ ಚುನಾವಣೆಗೆ ಜನರನ್ನು ಎಳೆತರುವುದು ಯಾವ ನ್ಯಾಯ ಸ್ವಾಮಿ. ? ಇವರು ಜನರನ್ನು ಕುರಿಗಳೆಂದೇ ಭಾವಿಸಿರುವಂತಿದೆ. ಚುನಾವಣೆಯಲ್ಲಿ ವೃಥಾ ವೆಚ್ಚವಾಗುವ ಕೋಟ್ಯಾಂತರ ಹಣವನ್ನು ಬಡ ಜನರಿಗೆ ಸೂರು ಕಲ್ಪಿಸಲು ಉಪಯೋಗಿಸಬಹುದಲ್ಲವೇ ?. ಮೊನ್ನೆ ಕೊಪ್ಪಳ, ಇಂದು ಬಳ್ಳಾರಿ ನಾಳೆ ಮತ್ತೊಂದು. ಹೀಗೆ ಹಣ ಪೋಲಾಗಿಸುವುದು ಬಿಟ್ಟು ರಾಜ್ಯದ ಹಲವಾರು ಜ್ವಲಂತ ಸಮಸ್ಯೆಗಳಿಗೆ ಲಕ್ಷ್ಯ ವಹಿಸುವುದು ಒಳಿತು.
ಪಕ್ಷಗಳ ನಾಯಕರು ಜನರಿಗೆ ಹಣ ಹಂಚುವುದು ಮತ್ತೆ ಅಧಿಕಾರಕ್ಕೆ ಬರುವುದೇ ಪ್ರತಿಷ್ಠೆ ಎಂದುಕೊಂಡಂತಿದೆ. ಶ್ರೀರಾಮುಲುರವರು ಅಧಿಕಾರದಲ್ಲಿದ್ದಾಗ ಮಾಡಲಾಗದ ಕ್ಷೇತ್ರದ ಸಾಧನೆ ಉಪಚುನಾವಣೆಯಲ್ಲಿ ಗೆದ್ದ ಮಾತ್ರಕ್ಕೆ ಆಗುತ್ತದೆಯೇ ? ಇದು ಕೇವಲ ಜನರನ್ನು ಹಾದಿ ತಪ್ಪಿಸುವ ಮತ್ತು ರಾಜ್ಯದ ಗಮನ ತಮ್ಮತ್ತ ಸೆಳೆಯುವ ಉದ್ದೇಶವಲ್ಲದೆ ಮತ್ತೇನು ? ವೃಥಾ ಪ್ರತಿಷ್ಠೆಯ ವಿಷಯ ಬಿಟ್ಟು ನಿಮ್ಮನ್ನು ನಂಬಿದ ರಾಜ್ಯಕ್ಕೆ ಒಳ್ಳೆಯ ಕೆಲಸ ಮಾಡಿ, ಜನರ ವಿಶ್ವಾಸ ಗಳಿಸಿ.
ಶ್ರೀರಾಮುಲುರವರು ರಾಜಿನಾಮೆ ನೀಡಿದ ಉದ್ದೇಶವೇ ಸ್ಪಷ್ಟವಾಗಿಲ್ಲ. ಲೋಕಾಯುಕ್ತರು ತಮ್ಮ ಹೆಸರನ್ನು ಗಣಿ ಆಕ್ರಮದಲ್ಲಿ ಉಲ್ಲೇಖಿಸಿದ್ದು, ಇದರಿಂತ ಮನನೊಂದು ರಾಜೆನಾಮೆ ನೀಡಿದೆ ಅಂತ ಹೇಳುವ ಇವರು, ತಮ್ಮ ವೈಯಕ್ತಿಕ ವಿಚಾರಗಳಿಗಾಗಿ ರಾಜೀನಾಮೆ ನೀಡಿ ಮತ್ತೆ ಚುನಾವಣೆಗೆ ಜನರನ್ನು ಎಳೆತರುವುದು ಯಾವ ನ್ಯಾಯ ಸ್ವಾಮಿ. ? ಇವರು ಜನರನ್ನು ಕುರಿಗಳೆಂದೇ ಭಾವಿಸಿರುವಂತಿದೆ. ಚುನಾವಣೆಯಲ್ಲಿ ವೃಥಾ ವೆಚ್ಚವಾಗುವ ಕೋಟ್ಯಾಂತರ ಹಣವನ್ನು ಬಡ ಜನರಿಗೆ ಸೂರು ಕಲ್ಪಿಸಲು ಉಪಯೋಗಿಸಬಹುದಲ್ಲವೇ ?. ಮೊನ್ನೆ ಕೊಪ್ಪಳ, ಇಂದು ಬಳ್ಳಾರಿ ನಾಳೆ ಮತ್ತೊಂದು. ಹೀಗೆ ಹಣ ಪೋಲಾಗಿಸುವುದು ಬಿಟ್ಟು ರಾಜ್ಯದ ಹಲವಾರು ಜ್ವಲಂತ ಸಮಸ್ಯೆಗಳಿಗೆ ಲಕ್ಷ್ಯ ವಹಿಸುವುದು ಒಳಿತು.
ಪಕ್ಷಗಳ ನಾಯಕರು ಜನರಿಗೆ ಹಣ ಹಂಚುವುದು ಮತ್ತೆ ಅಧಿಕಾರಕ್ಕೆ ಬರುವುದೇ ಪ್ರತಿಷ್ಠೆ ಎಂದುಕೊಂಡಂತಿದೆ. ಶ್ರೀರಾಮುಲುರವರು ಅಧಿಕಾರದಲ್ಲಿದ್ದಾಗ ಮಾಡಲಾಗದ ಕ್ಷೇತ್ರದ ಸಾಧನೆ ಉಪಚುನಾವಣೆಯಲ್ಲಿ ಗೆದ್ದ ಮಾತ್ರಕ್ಕೆ ಆಗುತ್ತದೆಯೇ ? ಇದು ಕೇವಲ ಜನರನ್ನು ಹಾದಿ ತಪ್ಪಿಸುವ ಮತ್ತು ರಾಜ್ಯದ ಗಮನ ತಮ್ಮತ್ತ ಸೆಳೆಯುವ ಉದ್ದೇಶವಲ್ಲದೆ ಮತ್ತೇನು ? ವೃಥಾ ಪ್ರತಿಷ್ಠೆಯ ವಿಷಯ ಬಿಟ್ಟು ನಿಮ್ಮನ್ನು ನಂಬಿದ ರಾಜ್ಯಕ್ಕೆ ಒಳ್ಳೆಯ ಕೆಲಸ ಮಾಡಿ, ಜನರ ವಿಶ್ವಾಸ ಗಳಿಸಿ.