ಕೆಲವು ಖಾಸಗಿ ಚಾನೆಲ್ (ವಿಶೇಷವಾಗಿ ಸುವರ್ಣ ಚಾನೆಲ್) ಗಳಲ್ಲಿ ಪ್ರಸಾರವಾಗುತ್ತಿರುವ ಕಾರ್ಯಕ್ರಮಗಳು ಸಮಾಜವನ್ನು ಅಹಿತಗೊಳಿಸುತ್ತಿವೆ. ಜಾತಕ, ರಾಶಿ ಭವಿಷ್ಯಗಳು ಇಂದು ಅಪ್ರಸ್ತುತವೆಂತಲೇ ಹೇಳಬೇಕು. ಅಂತಹ ಕಾರ್ಯಕ್ರಮಗಳು ಇಂದು ಬಹುತೇಕ ಚಾನೆಲ್ ಗಳಲ್ಲಿ ದಿನಕ್ಕೆ ಸತತ ಎರಡು ಘಂಟೆ ಪ್ರಸಾರವಾಗುತ್ತಿವೆ. ಬಹುತೇಕ ಎಲ್ಲ ವರ್ಗದ ಜನರ ಭವಿಷ್ಯವನ್ನು ತಿಳಿಸುವ ಆ ಕಾರ್ಯಕ್ರಮದಲ್ಲಿ ಸತ್ಯಕ್ಕಿಂತ ಹೆಚ್ಚಾಗಿ ಕಪೋಲಕಲ್ಪಿತ ವಿಷಯಗಳು ಪ್ರಸ್ತಾಪಿಸಲಾಗುತ್ತಿದೆ. ವೈಜ್ಞಾನಿಕ ಪ್ರಪಂಚ ಅರಿಯುವ ಕಾಲದಲ್ಲಿ ಇಂತಹ ರಾಶಿ ಭವಿಷ್ಯವನ್ನು ನೆಚ್ಚಿಕೊಳ್ಳಬಹುದೇ ?
ಕೆಲವು ವಾಹಿನಿಗಳಲ್ಲಿ ರಿಯಾಲಿಟಿ ಶೋ ನೆಪದಲ್ಲಿ ಸ್ಪರ್ಧಾಳುಗಳಿಗೆ ಅಸಹನೀಯ ಹಿಂಸೆ ನೀಡಲಾಗುತ್ತಿದೆ. ಇನ್ನು ದಾರವಾಹಿಗಳಲ್ಲಂತೂ ಬರೀ ಗಯ್ಯಾಳಿಗಳ ಮೋಸ, ವಂಚನೆಯ ನಾಟಕೀಯ ಬೆರೆತ ಮಾತುಗಳು. ಮಕ್ಕಳೊಟ್ಟಿಗೆ ಕುಳಿತು ವೀಕ್ಷಿಸುವ ಪಾಲಕರು ಮುಜುಗರ ಪಡದೆ ವಿಧಿಯಿಲ್ಲ ? ಸಾಲದೆಂಬಂತೆ ಒಂದೇ ಕಾರ್ಯಕ್ರಮವನ್ನು ಪದೇ ಪದೇ ಪ್ರಸಾರಿಸುತ್ತಾರೆ. ಇಂತಹ ಪಾತ್ರಗಳನ್ನು ವೈಭವೀಕರಿಸಿ ಚಿತ್ರಿಸಿದರೆ ಸಮಾಜದ ಸ್ವಾಸ್ಥ್ಯ ಏನಾದೀತು. ಕಾರ್ಯಕ್ರಮದ ನಿರೂಪಕರು ಈ ತರಹದ ಕಾರ್ಯಕ್ರಮಗಳನ್ನು ಕಡಿಮೆ ಮಾಡಿ, ವಿದ್ಯಾರ್ಥಿಗಳ ಜ್ಞಾನ ಹೆಚ್ಚಿಸುವ ಮತ್ತು ಸಮಾಜದ ಸ್ವಾಸ್ಥ್ಯ ಕಾಪಾಡುವ ಕಾರ್ಯಕ್ರಮಗಳನ್ನು ಹೆಚ್ಹೆಚ್ಚು ಪ್ರಸಾರ ಮಾಡಲಿ.