ಶುಕ್ರವಾರ, ಅಕ್ಟೋಬರ್ 28, 2011

ಗೌಡರ ಉಸಾಬರಿ



ದಿಡೀರನೆ ಮಾಧ್ಯಮದ ಎದುರು ಪ್ರತ್ಯಕ್ಸವಾಗಿ ಇಲ್ಲಸಲ್ಲದ ಅಪಾದನೆ ಮಾಡುವುದು ಗೌಡರಿಗೆ ಹೊಸದೇನಲ್ಲ. ತುಂಡು ಗುತ್ತಿಗೆ ಕಾಮಗಾರಿ ಕುರಿತಂತೆ ಅಧಿಕಾರಿಗಳ ಪರ ಮಾತಾಡಲು ಇವರಿಗೆ ನೈತಿಕತೆ ಇದೆಯೇ ? ತಪ್ಪಿತಸ್ಥರು ಯಾರೇ ಆಗಿರಲಿ ಶಿಕ್ಷೆ ನೀಡಲು ನ್ಯಾಯಾಂಗ ಸದೃಢವಾಗಿದೆ.ವಿನಾಕಾರಣ ಜೈಲಿನಲ್ಲಿರುವ ಯಡಿಯೂರಪ್ಪನವರನ್ನು ದೂಷಿಸುವುದು ಎಷ್ಟು ಸರಿ. ಜೈಲಿನಲ್ಲಿದ್ದು ಅವರು ಎಂತ ದ್ವೇಷ ರಾಜಕಾರಣ ಮಾಡಬಲ್ಲರು ಗೌಡರೇ ಹೇಳಬೇಕು. ಅನುಮಾನಿಸಿದ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಿದರೆ ತಪ್ಪೇನು ? ಆಕ್ರಮ ಯಾರೇ ಮಾಡಿರಲಿ ತಕ್ಕ ಶಿಕ್ಷೆ ಅನುಭವಿಸುತ್ತಾರೆ. ಗೌಡರು ಯಾರ ವಿರುದ್ಧವೋ ತನಿಖೆ ನಡೆದರೆ ಅದಕ್ಕೆ ಜಾತಿ ಲೇಪ ಕಟ್ಟಿ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳ ವಿರುದ್ಧ ತನಿಖೆ ಆರಂಭಿಸಿದರೆ ಯುದ್ಧ ಆರಂಭವಾಗಿದೆ ಅನ್ನುವ ಗೌಡರ & ಅಧಿಕಾರಿಗಳ ಸಂಬಂಧವನ್ನು ಎನ್ನನ್ನಬೇಕು. ಬಹುಶಃ ತಾವು ಜೈಲಿಗೆ ಹೋಗುವ ಭೀತಿ ಗೌಡರಿಗೆ ಇರಲಿಕ್ಕೆ ಸಾಕು. ತಾವು ತಪ್ಪು ಮಾಡಿಲ್ಲ ಅನ್ನೋದಾದರೆ ರಾಜಕೀಯ ನಿವೃತ್ತಿ ಅಂಚಿನಲ್ಲಿರುವ ತಮಗೆ ಉಸಾಬರಿ ಏಕೆ ?. ನಾನು ಮಾಡಿರುವ ಕೆಲಸಕ್ಕೆ ಮನ್ನಣೆ ಸಿಗುತ್ತದೆ ಅಂತ ಹೇಳುವ ಅವರು ರಾಜ್ಯಕ್ಕೆ ತಾವು ಮಾಡಿರುವ ಕೆಲಸವನ್ನು ಒಮ್ಮೆ ರಾಜ್ಯದ ಜನತೆ ಮುಂದೆ ಅವಲೋಕಿಸುವುದು ಒಳ್ಳೆಯದಲ್ಲವೇ ?



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ